ಬೆಳ್ತಂಗಡಿ - ಚಾರ್ಮಾಡಿ ಮುಹಿದ್ದೀನ್ ಜುಮಾ ಮಸೀದಿಯ ಧರ್ಮಗುರುವಿನ ಮೇಲೆ ತಂಡದಿಂದ ಹಲ್ಲೆ..!!


ಬೆಳ್ತಂಗಡಿ: ಕ್ಷುಲ್ಲಕ ವಿಚಾರದಲ್ಲಿ ಚಾರ್ಮಾಡಿಯ ಮುಹಿದ್ದಿನ್‌ ಜುಮ್ಮಾ ಮಸೀದಿಗೆ ನುಗ್ಗಿ ಧರ್ಮಗುರುವಿನ ಮೇಲೆ ಸುಮಾರು 12 ಜನರ ತಂಡದಿಂದ ಹಲ್ಲೆ ನಡೆಸಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ಗಾಯಗೊಂಡ ಮುಹಿದ್ದಿನ್‌ ಜುಮ್ಮಾ ಮಸೀದಿ ಜಾಲಲಿನಗರದ ಧರ್ಮಗುರು ಶಮೀರ್‌ ಮುಸ್ಲಿಯಾರ್‌ (37) ಅವರು ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.


ಸ್ಥಳೀಯರಾದ ಬದ್ರುದ್ದಿನ್‌, ಸಂಶುದ್ದಿನ್‌, ಅಹಮದ್‌ ಟಿಬಿ ರೋಡ್‌, ನೌಫಲ್‌, ಅನ್ಸರ್‌, ಮುನೀರ್‌ ಅಸೀಫ್‌, ಅಫೀಝ್, ಅಫ್ರೀಜ್‌, ಶರೀಫ್‌, ಅಬ್ದುಲ್‌ ಖಾದರ್‌ ಮತ್ತಿತರರು ಮಸೀದಿಗೆ ನುಗ್ಗಿ ಹಲ್ಲೆ ಮಾಡಿರುವುದಾಗಿ ಅವರು ಆರೋಪಿಸಿದ್ದಾರೆ.

ಹಲ್ಲೆ ಬಳಿಕ ಮಸೀದಿ ಆವರಣದಲ್ಲಿ ಹಲ್ಲೆ ಮಾಡಿದ ತಂಡದವರು ಮತ್ತು ಮಸೀದಿಯವರ ಜತೆ ಗಲಾಟೆ ನಡೆದಿದ್ದು, ಈ ಘಟನೆಯ ಬಗೆಗಿನ ವೀಡಿಯೋ ವೈರಲ್‌ ಅಗಿದೆ. ಈ ಬಗ್ಗೆ ಧರ್ಮಸ್ಥಳ ಠಾಣೆಗೆ ಧರ್ಮಗುರು ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.