ಡಾ.ಹಾಜಿ.ಯಸ್.ಅಬೂಬಕ್ಕರ್ ಆರ್ಲಪದವು ರವರಿಗೆ ಕೊರಿಂಗಿಲ MISA UAE ಸಮಿತಿಯಿಂದ ದುಬೈಯಲ್ಲಿ ಸನ್ಮಾನ

ಮಂಗಳೂರು: ಪುತ್ತೂರು ತಾಲೂಕು ಕೊರಿಂಗಿಲ ಜಮಾಅತಿಗೊಳಪಟ್ಟು ಯುಎಇ ಯಲ್ಲಿ ಕಾರ್ಯ ಪ್ರವೃತ್ತರಾಗಿರುವ  ಮಿಸ್ಬಾಹುಲ್ ಇಸ್ಲಾಂ ಸ್ಟೂಡೆಂಟ್ಸ್ ಅಸೋಸಿಯೇಷನ್ MISA (R) ಕೊರಿಂಗಿಲ UAE ಯೂನಿಟ್ ಇದರ ವತಿಯಿಂದ ಭಾರತ ಸೇವಾ ರತ್ನ ಪ್ರಶಸ್ತಿ ವಿಜೇತರೂ ಗಡಿನಾಡ ದ್ವನಿ ಪತ್ರಿಕೆ  ಸಂಸ್ಥಾಪಕರೂ ಆರ್ಲಪದವು ಬದ್ರಿಯ ಜುಮಾ ಮಸ್ಜಿದ್ ಪುನರ್ ನಿರ್ಮಾಣ ಸಮಿತಿ ಚೇರ್ಮನ್ ಆಗಿರುವ ಡಾ ಹಾಜಿ ಎಸ್ ಅಬೂಬಕರ್ ಅರ್ಲಪದವು ಅವರಿಗೆ ಸನ್ಮಾನ ಕಾರ್ಯಕ್ರಮ  ಯುಎಇ ಯ ದುಬೈ ದೇರ ಮಾಲಿಕ್ ರೆಸ್ಟೋರೆಂಟಿನಲ್ಲಿ ನಡೆಯಿತು 
ಸನ್ಮಾನ ಸ್ವೀಕರಿಸಿದ ಡಾ ಹಾಜಿ ಯಸ್ ಅಬೂಬಕ್ಕರ್ ಆರ್ಲಪದವು ಮಾತನಾಡುತ್ತಾ ಸಂಘಟನೆಗಳು ಶಿಕ್ಷಣಕ್ಕೆ ಒತ್ತು ಕೊಡುತ್ತಾ ಸಮುದಾಯವನ್ನು ಬಲಪಡಿಸಬೇಕು ಹೊಸದಾಗಿ ವಿದೇಶಗಳಿಗೆ ಬರುವವರಿಗೆ ಮಾರ್ಗದರ್ಶನ ಮಾಡುವ  ಕೆಲಸವನ್ನು ಕೈಗೆತ್ತಿಕೊಳ್ಳಬೇಕೆಂದು  ಸಲಹೆಯನ್ನು ನೀಡುತ್ತಾ ಮಿಶ್ಬಾಹುಲ್ ಇಸ್ಲಾಂ ಸ್ಟೂಡೆಂಟ್ ಎಸೋಶಿಯೇಶನ್ ನಡೆಸುತ್ತಿರುವ ಕಾರ್ಯವೈಖರಿಯನ್ನು ಶ್ಲಾಘಿಸಿದರು. M.I.S.A ಯುಎಇ ಘಟಕದ ಅಧ್ಯಕ್ಷರಾದಂತಹ ಶಾಹುಲ್ ಹಮೀದ್ ಪೊರ್ದಳ್ ರವರು ಅಧ್ಯಕ್ಷತೆಯನ್ನು  ವಹಿಸಿದರು 




 ದುವಾ ಆಶೀರ್ವಚನವನ್ನು ಫೈಝಿ ಕಳತ್ತೂರು ಕಟ್ಟತಡ್ಕ ಇವರು ನೆರವೇರಿಸಿದರು.
 ವೇದಿಕೆಯಲ್ಲಿರುವ ಗಣ್ಯರನ್ನು ಮತ್ತು ಅತಿಥಿಗಳನ್ನು ಸದಸ್ಯರುಗಳನ್ನು M.I.S.A ಯುಎಇ ಘಟಕದ ಪ್ರದಾನ ಕಾರ್ಯದರ್ಶಿ ಅಸ್ಕರ್ ಅಲಿ ಕೊರಿಂಗಿಲ ರವರು ಸ್ವಾಗತಿಸಿದರು.

 DKSC ಯುಎಇ ನ್ಯಾಷನಲ್ ಕಮಿಟಿ  ಇದರ ಪ್ರದಾನ ಕಾರ್ಯದರ್ಶಿ ಮತ್ತು ಆರ್ಲಪದವು ಬದ್ರಿಯ ಜುಮಾ ಮಸ್ಜಿದ್ ಗಲ್ಫ್ ಸಮಿತಿ ಅಧ್ಯಕ್ಷರು ಆದಂತಹ ಎಸ್ ಯೂಸುಫ್ ಆರ್ಲಪದವುರವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಸಂದರ್ಭೋಚಿತವಾಗಿ ಮಾತನಾಡಿದರು.




ಮಿಸ್ಬಾಹುಲ್ ಇಸ್ಲಾಂ ಸ್ಟೂಡೆಂಟ್ಸ್ ಅಸೋಸಿಯೇಷನ್ (M.I.S.A) ಕೊರಿಂಗಿಲ ವತಿಯಿಂದ ಕಳೆದ ವರ್ಷಗಳಿಂದ ನಡೆಸಿಕೊಂಡು ಬಂದಂತಹಾ ಸಾಮಾಜಿಕ ಸೇವೆಯನ್ನು ಯುಎಇ ಘಟಕದ ಸಂಘಟನಾ ಕಾರ್ಯದರ್ಶಿ ಜುನೈದ್ ಕೀಲಂಪಾಡಿ ಮತ್ತು M.I.S.A ಯುಎಇ ಘಟಕದ
ಕೋಶಾದಿಕಾರಿ ಜಾಬಿರ್ ಬೆಟ್ಟಂಪಾಡಿ ಗುಂಡ್ಯಡ್ಕ ರವರು ಪ್ರಾಸ್ತಾವಿಕವಾಗಿ ವಿವರಿಸಿದರು.

ಕಾರ್ಯಕ್ರಮದಲ್ಲಿ M.I.S.A ಯುಎಇ ಘಟಕದ ಗೌರವ ಸಲಹೆಗಾರರಾದ ಬಿ ಎ ಹಾರೀಸ್ ಅಚ್ಚು ಬೆಂಗತಡ್ಕ ,ಮಜೀದ್ ಪೊರ್ದಳ್ ,ಮತ್ತು ಯು ಎಂ ಸಿರಾಜ್ ಬೆಳ್ಳಾರೆ,ಯಾಸಿರ್ ಕಳತ್ತೂರು ಕಟ್ಟತಡ್ಕ , ನೌಫಲ್ ಕಿನ್ನಿಂಗಾರ್,ರಾಶಿದ್ ತ್ರಿಶೂರ್ ಮತ್ತು ಸದಸ್ಯರು  ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು M.I.S.A ಕೋಶಾದಿಕಾರಿ ಜಾಬಿರ್ ಬೆಟ್ಟಂಪಾಡಿ* ರವರು ನಡೆಸಿದರು 
 M.I.S.A ಯುಎಇ ಜೊತೆ ಕಾರ್ಯದರ್ಶಿ ಎಸ್ ಇರ್ಷಾದ್ ಕೊರಿಂಗಿಲ ಅಜ್ಮಾನ್
ರವರು ವಂದಿಸಿದರು